ಧಾರವಾಡಕ್ಕೆ

ಧಾರವಾಡ –
ನನ್ನ ಭಾರವಾದ
ಹೃದಯದಿಂದಿಳಿದ
ಕವಿತೆ ಇದು

ನಿನ್ನ ಮಡಿಲೊಳಗಿಟ್ಟು
ಕೆಲ ಕಾಲ ತೂಗಿ
ನಗಿಸಿ – ನನ್ನೊಳಗಿಂದ
ಆಳವಾಗಿ
ಬದುಕುವ ಕಲೆಯ ಕಲಿಸಿದೆ ನನಗೆ
ನಿನ್ನ ನೆನೆಯುತ್ತೇನೆ ಅಹೋರಾತ್ರಿ

ಇಲ್ಲಿ
ಮೋಡಗಳ ನಡುವೆ ನಡೆದಾಡುವಾಗ
ನಗುವಾಗ ಅಳುವಾಗ ದುಃಖವಾದಾಗ
ಈ ನನ್ನ ಮನಸ್ಸು ಮುಟ್ಟುತ್ತದೆ
ಮಾಳಮಡ್ಡಿ
ಸಪ್ತಾಪುರ

ಗೊತ್ತು, ಗುರಿಯಿಲ್ಲದೆ ಅಲ್ಲಿ ಅಲೆದಿದ್ದೇನೆ
ಹುಡುಕಿದ್ದೇನೆ
ನನ್ನನ್ನು ನಾನೆ
ನನ್ನ ಕಥೆಗಳೋ – ಮುಟ್ಟಿದರೆ ಜುಮ್ಮೆನುವ
ಶೃತಿ ಮಾಡಿಟ್ಟ ವೀಣೆ

ನೀ ನನಗೆ ಕೊಟ್ಟಿರುವ ಆತ್ಮೀಯ ಸುಖಕ್ಕೆ
ಎದೆ ಕೊರೆವ ನೋವಿಗೆ
ನೀರಿಗೆ
ಹಾಲಿಗೆ
ಫೇಡೆಗೆ
ಕವಿತೆಗೆ

ತಾಯೀ,
ನಾ ನಿನಗೆ ಏನು ಕೊಟ್ಟಿದ್ದೇನೆ ?
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಮಣ್ಣಿನ ಹಾಡು
Next post ನಮಕು ಹರಾಮು ನಾಗಪ್ಪಯ್ಯ

ಸಣ್ಣ ಕತೆ

  • ಅವರು ನಮ್ಮವರಲ್ಲ

    ಪೇದೆ ಪ್ರಭಾಕರ ಫೈಲುಗಳನ್ನು ನನ್ನ ಟೇಬಲ್ ಮೇಲೆ ಇಟ್ಟು, ‘ಸರ್ ಸಾಹೇಬರು ನಿಮ್ಮನ್ನು ಕರೆಯುತ್ತಿದ್ದಾರೆ’ ಎಂದು ಹೇಳಿ ಮಾಮೂಲಿನಂತೆ ಹೊರಟು ಹೋದ. ಸಮಯ ನೋಡಿದೆ. ೧೦:೩೦ ಗಂಟೆ.… Read more…

  • ಆಮಿಷ

    ರಮಾ ಕುರ್ಚಿಯನ್ನೊರಗಿ ಕುಳಿತಿದ್ದಳು. ದುಃಖವೇ ಮೂರ್ತಿವೆತ್ತಂತೆ ಕುಳಿತಿದ್ದ ಅವಳ ಹೃದಯದಲ್ಲಿ ಭೀಕರ ಕೋಲಾಹಲ ನಡೆದಿತ್ತು. ಕಣ್ಣುಗಳು ಆಳಕ್ಕಿಳಿದಿದ್ದವು. ದೇಹದ ಅಣು ಅಣುವೂ ನೋವಿನಿಂದ ಮಿಡಿಯುತ್ತಿತ್ತು. "ತಾನೇಕೆ ದುಡುಕಿಬಿಟ್ಟೆ?… Read more…

  • ರಾಮಿ

    ‘ಸಲಾಮ್ರಿ’ ರೈಲಿನ ಹೊತ್ತಾಗಿದೆ. ವೆಂಕಟೇಶನು ಒಂದೇಸವನೆ ತನ್ನ ಕೈಯಲ್ಲಿಯ ಗಡಿಯಾರವನ್ನು ನೋಡುತ್ತಿದ್ದಾನೆ. ‘ಸಲಾಮ್ರೀಽ ಏಕ ಪೈಸಾ.’ ಆಗ ಮತ್ತೆ ಒದರಿದಳು. ಟಾಂಗಾದ ತುದಿ ಹಿಡಿದು ಕೊಂಡು ಓಡ… Read more…

  • ಆಪ್ತಮಿತ್ರ

    ಧಾರಾಕಾರವಾಗಿ ಮಳೆ ಸುರಿಯುತ್ತಿತ್ತು. ದೊಡ್ಡದೊಡ್ಡ ಮರಗಳು ಭೋರ್ ಎಂದು ಬೀಸುವ ಗಾಳಿಯಲ್ಲಿ ತೂಗಾಡುತ್ತಿದ್ದವು. ಇಂಗ್ಲೆಂಡಿನ ಆ ಚಳಿ ಮಳೆಯಲ್ಲಿ ಎರಡು ಆಪ್ತಮಿತ್ರ ಜೀವಗಳು ಒಂದನ್ನು ಅನುಸರಿಸಿ ಇನ್ನೊಂದು… Read more…

  • ಕೊಳಲು ಉಳಿದಿದೆ

    ಮಾತಿನ ತೆರೆ ಒಂದು "ನೋಡಿ, ಜನರು ನನ್ನನ್ನು ನೋಡಿ ನಗುತ್ತಾರೆ! ಈ ಬಂಗಾರದ ಕೃಷ್ಣನ ಮೂರ್ತಿ ಇವಳ ಕೈಯಲ್ಲಿ ಯಾವಾಗಲೂ ಏಕೆ ಎಂದು ಕೇಳುತ್ತಾರೆ! ನನ್ನ ಹತ್ತರ… Read more…

cheap jordans|wholesale air max|wholesale jordans|wholesale jewelry|wholesale jerseys